ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಪಂಚದೈವ ಪ್ರತಾಪ ಪ್ರಸಂಗ ಬಿಡುಗಡೆ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಡಿಸೆ೦ಬರ್ 1 , 2014
ಡಿಸೆ೦ಬರ್ 1, 2014

ಪಂಚದೈವ ಪ್ರತಾಪ ಪ್ರಸಂಗ ಬಿಡುಗಡೆ

ಕೋಟ : ಪೌರಾಣಿಕ ಹಿನ್ನೆಲೆಯುಳ್ಳ ಯಕ್ಷಗಾನ ಪ್ರಸಂಗಗಳು ಪ್ರಸ್ತುತ ಅಗತ್ಯವಿದ್ದು, ದೈವಗಳ ಮಹತ್ವ ಆಧಾರಿತ ಪ್ರಸಂಗ ಳನ್ನು ಪ್ರದರ್ಶನ ನೀಡುವುದರಿಂದ ಮೇಳಕ್ಕೂ ಖ್ಯಾತಿ ಬರುತ್ತದೆ ಎಂದು ವೇ.ಮೂ. ವೆಂಕಪಯ್ಯ ಭಟ್ ಯಡಬೆಟ್ಟು ಹೇಳಿದರು.

ಅವರು ಶುಕ್ರವಾರ ಸಾಸ್ತಾನ ಗೋಳಿಗರಡಿ ಮೇಳದವರು ಈ ಸಾಲಿನಲ್ಲಿ ಪ್ರದರ್ಶಿಸಲಿರುವ ಪ್ರಸಂಗಕರ್ತ ಎಂ.ಎಚ್. ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ಪಂಚದೈವ ಪ್ರತಾಪ ಪ್ರಸಂಗವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಛಂದೋಬದ್ಧ ಪ್ರಸಂಗಕರ್ತರೆಂದೇ ಹೆಸರು ಪಡೆದಿರುವ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರ 17ನೇ ಪ್ರಸಂಗ ಇದಾಗಿದ್ದು, ಕೃತಿಯನ್ನು ಮೇಳದ ಭಾಗವತ ಹೊಸಾಳ ಉದಯ ಕುಮಾರ್ ಅವರಿಗೆ ಹಸ್ತಾಂತರಿಸಲಾಯಿತು.

ಮೇಳದ ಅಧ್ಯಕ್ಷ ಜಿ.ವಿಠಲ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೋಳಿಗರಡಿ ಪಾತ್ರಿಗಳಾದ ಶಂಕರ ಪೂಜಾರಿ, ಹಿರಿಯ ಕಲಾವಿದ ಹೆಮ್ಮಾಡಿ ರಾಮ ಚೆಂದನ್, ಪ್ರಸಂಗಕರ್ತ ಎಂ.ಎಚ್. ಪ್ರಸಾದ್ ಕುಮಾರ್ ಉಪಸ್ಥಿತರಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಐರೋಡಿ ಗೋವಿಂದಪ್ಪ ಶುಭಾಶಂಸನೆ ಗೈದರು.

ಈ ಸಂದರ್ಭ ಪ್ರಸಂಗಕರ್ತರನ್ನು ಸನ್ಮಾ ನಿಸಲಾಯಿತು. ಮೇಳದ ಜತೆ ಕಾರ್ಯ ದರ್ಶಿ ಎ.ಎನ್. ಶಂಕರ ಕುಲಾಲ್ ಐರೋಡಿ ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ ಪೂಜಾರಿ ಪಾಂಡೇಶ್ವರ ನಿರ್ವಹಿಸಿ ದರು. ಮೇಳದ ಕೋಶಾಧಿಕಾರಿ ಐರೋಡಿ ಗಣಪಯ್ಯ ಆಚಾರ್ಯ ವಂದಿಸಿದರು.



ಕೃಪೆ : http://www.vijaykarnataka.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ